ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಶುಕ್ರವಾರ, ಫೆಬ್ರವರಿ 18

ನಂಬಿಕೆ ಮೇಲೆ ಅತಿ ಪ್ರಯೋಗ ಸಲ್ಲದು

"ನಮ್ಮ ದೇಶದ ನೆಲೆಗಟ್ಟೆನ್ನುವುದು ನಮ್ಮಲ್ಲಿನ ಹಲವಾರು ಆಚಾರ,ವಿಚಾರಗಳಲ್ಲಿ ನಿಂತಿದೆ,ಹೀಗಿರುವಾಗ ಆಧುನಿಕತೆಯ (ಹೊಸತನದ)ಹೆಸರಿನಲ್ಲಿ (ಕೆಲವೊಂದು) ನಂಬಿಕೆಗಳ ಅಸ್ತಿತ್ವನ್ನು ಪ್ರಶ್ನಿಸಿಸುವುದು ಅಸಂಮಜವಲ್ಲವೇ".ಅಲೆಮಾರಿ      

ನಾವು ಮನುಷ್ಯರೇ ಹೀಗೆ, ನಮಗೇನಾದರು ಹೆಚ್ಚಾಗಿ ವಿಷಯ ತಿಳಿದಿದ್ದರೆ ಬೇಡದ ವಿಚಾರಗಳಲ್ಲಿಯೂ ಮೂಗು ತೂರಿಸುವುದು ಜಾಸ್ತಿ. ಅದರ ವಿವಿಧ ಮಜಲುಗಳನ್ನು ಕಂಡು ಹಿಡಿಯುದರಲ್ಲಿಯೆ ನಮಗೆ ಆಸಕ್ತಿ. ಆ ವಿಚಾರಗಳು ಪ್ರಸ್ತುತ ಅಗತ್ಯವಿದೆಯೊ, ಅದರ ಪರಣಾಮವೇನು, ಸಾಮಜಕ್ಕೇನು ಲಾಭ ಎಂದು ಆಲೋಚಿಸದೆ ನಾವು ಮನ್ನುಗ್ಗಿ ಮಂಡಿಸಿ ಬಿಡುತ್ತೇವೆ. ಆದರೆ ಇದರ ಪರಿಣಾಮ ಅನುಭವಿಸುವರು  ಜನರು,ಹೋಗುವುದು ಅವರ ನಂಬಿಕೆ,ವಿಶ್ವಾಸಗಳು.ಇದು ಇಪ್ಪತ್ತೊಂದನೆಯ ಜಮಾನ  ಇಲ್ಲಿ ಎಲ್ಲವೂ ವೇಗದ ಸೆಳೆಯಲ್ಲಿದೆ. ಇಲ್ಲಿ ನಂಬಿಕೆ, ವಿಶ್ವಾಸಗಳಗೆ ಕೆಳಸ್ತರದ ಜಾಗ . ಅಭಿವೃದ್ದಿ, ಯಾಂತ್ರಿಕತೆ, ಸ್ವಾರ್ಥ, ಅಮಾನವೀಯಕ್ಕೆ  ಅಗ್ರಸ್ಥಾನ. ಇದು ಈ ಶತಮಾನದ ಪ್ರತ್ಯೇಕ ಗುಣವೆಂದರೂ ತಪ್ಪಾಗಲಾರದು. ಇದರಂತೆಯೇ  ಬೆಳೆದಿದ್ದೇವೆ ನಾವು ನೀವು ಕೂಡ .
ಹಿಂದೊಂದು ಕಾಲವಿತ್ತು ಅಲ್ಲಿ ವಿಶ್ವಾಸ ನಂಬಿಕೆಯೇ ಎಲ್ಲಾವಾಗಿತ್ತು, ಕೆಲವೊಂದು ವಿಚಾರಗಳಲ್ಲಿ ಮೌಢ್ಯವಿದ್ದರು, ಅದರಲ್ಲಿ ಸಮಾಧಾನ, ಸೌಖ್ಯವಿತ್ತು. ಆದರೆ ಆಧುನಿಕತೆಯ ಗಾಳಿ ಸೋಕಿದ್ದೆ ತಡ ಇವೆಲ್ಲವೂ ಅದಲು ಬದಲು. ಹಾಗಂತ ಇದು ಆಧುನಿಕತೆಯ ವಿರೋಧವಲ್ಲ, ಇದು ಅತೀ ಆಧುನೀಕತೆಯ ನಿರಾಕರಣೆಯಷ್ಟೆ. ಯಾಂಕೆಂದರೆ ಈ ಅತಿ ಆಧುನಿಕತೆ ನಮಗೆ ತಂದಿಟ್ಟ ನಷ್ಟ ಅಷ್ಟಿಷ್ಟಲ್ಲ. ಈ ಸಮಾಜ ಬೆಳೆದಂತೆ, ಸಂಶೋದನೆ ನಮ್ಮಲ್ಲಿನ ಮೌಢ್ಯದ ಪೊರೆಯನ್ನು ಕಳಚುತ್ತಾ ಬಂದು ಅವುಗಳ ಅಸ್ತಿತ್ವವನ್ನೆ  ಕಳೆದುಕೊಳ್ಳುವಂತೆ ಮಾಡಿತು,ಇದು ಶ್ಲಾಘನೀಯ ಕೂಡ.ಆದರೆ ನಂಬಿಕೆಗಳ ಮೇಲೆ ಸಂಶೋದನೆಗಳ ಅತಿಯಾದ ಪ್ರಯೋಗ , ಅದರಲ್ಲಿಯೆ ಹೊಸತನದ ಹುಡುಕಾಟ , ನಮ್ಮ ವ್ಯವಸ್ಥೆಯ ದಿಕ್ಕನ್ನೆ ಬದಲಾಯಿಸಿತು, ಜನರನ್ನು ಸ್ವಾರ್ಥರನ್ನೂ, ಸಂಕುಚಿತರನ್ನಾಗಿಸಿತು. ಇದಕ್ಕಿಂತಲೂ ಮಿಗಿಲಾಗಿ ಅವರನ್ನೂ ಭಾವನೆಗಳಿಲ್ಲದ ಯಾಂತ್ರಿಕ ಮಾನವರನ್ನಾಗಿಸಿತು, ಇದೊಂದು ದುರಂತವೆ ಸರಿ.
ಇದೀಗ ಇಂತಹ ಮತ್ತೊಂದು ಸರದಿ ಅದುವೆ ಶಬರಿಮಲೆ ಜ್ಯೋತಿ ಬಗೆಗೆ ಇತ್ತೀಚೆಗೆ ಎದ್ದಿರುವ ವಾದ. ಅದು ಸತ್ಯವೊ, ಮಿತ್ಯವೊ ಎನ್ನುವ ಸಂಶೋದಕರ , ಚಿಂತಕರ ನಡೆ, ಅದರ ಸತ್ಯಶೋದನೆಯೆಡೆಗಿನ ಹಲವರ ಅಮಿತ ಆವೇಶ ನೋಡಿದರೆ ಬಹುಷ ಅವರು ಇದರ ಪರಿಣಾಮಗಳ ಬಗ್ಗೆ ಆಲೋಚಿಸಿಲ್ಲವೇನೊ ಅನ್ನಿಸುತ್ತಿದೆ. ನಂಬಿಕೆಗಳು ಕ್ಷೀಣವಾಗುತ್ತಿರುವ ಈ ಕಾಲದಲ್ಲಿ ಇಂತಹ ಕೆಲವು ಆಚಾರ, ವಿಚಾರಗಳು ಜನರನ್ನು ಕೋಟಿ,ಕೋಟಿ ಸಂಖ್ಯೆಯಲ್ಲಿ ಒಂದಾಗಿ ಒಂದಡೆ ಸೇರಿಸುತ್ತಿದೆ ಎನ್ನುವುದೇ ವಿಶೇಷ. ಆದರೆ ಅಲ್ಲಿಗೂ ಕತ್ತರಿ ಹಾಕಲು ಹೊರಟಿದ್ದಾರಲ್ಲ ಇವರು, ಏನು ಹೇಳಬೇಕು ಇವರ ನಡೆಗೆ. ನಾವೇನು,  ನಮ್ಮ ದೇಶವೇನು, ನಮ್ಮ ಮೂಲ ಸಂಸ್ಕ್ರತಿಯೇನೆಂದು ಅರಿಯದೆ ಇಂತಹ ವಿಚಾರಗಳಿಗೆ ಆಸ್ಪದ ಕೊಟ್ಟದ್ದು ಖಂಡಿತವಾಗಿಯು ಅಸಂಮಂಜಸ. ಇಲ್ಲೇನು ಮೌಢ್ಯತೆಯಿಲ್ಲ, ಜನರು ಮೋಸ ಹೋಗುವುದಿಲ್ಲ, ನಮ್ಮ ಪುರಾಣ, ಐತಿಹಾಸಿಕ ಸತ್ಯಗಳು ಹೇಳುವಂತೆ ಇಲ್ಲಿ ನಡೆಯುತ್ತಿದೆ, ಮತ್ಯಾಕೆ ಈ ಅತಿ ಬುದ್ದಿವಂತಿಕೆಯ ನಡೆ. ಇದರಿಂದ ನೋವಾಗುದು ಆಸಂಖ್ಯಾತ ಜನರ ನಂಬಿಕಗೆ, ಭಾವನೆಗಳಿಗೆ. ನಮ್ಮಲ್ಲಿ ಅಭಿವೃದ್ದಿ, ಸಂಶೋದನೆ ಬೇಕು ಆದರೆ ಯಾವುದು ಅತಿಯಾದರೆ ಅದು ನಮಗೆ ಮಾರಕವಾಗುತ್ತದೆ. ಆದ್ದರಿಂದ ಜನರನ್ನು ತೀರಾ ನಿರ್ಭಾವುಕರನ್ನಾಗಿಸುವ ಇಂತಹ ವಿಚಾರಗಳ ಬಗ್ಗೆ ಮಾತನಾಡುವಾಗ, ಸಂಶೋಧಿಸುವಾಗ ಸ್ವಲ್ಪ ಆಲೋಚಿಸಿ ಬುದ್ದಿ ಜೀವಿಗಳೆ.