ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಶನಿವಾರ, ಫೆಬ್ರವರಿ 19

ಆದರ್ಶ ನಾಯಕನಿಗಾಗಿ ಕಾಯುತಿದೆ ಭಾರತ..

ಇದು ನಮ್ಮ ದೇಶದ ದುರಂತವೊ..ಅಥಾವ ಒಳ್ಳೆಯದೊ ಗೊತ್ತಿಲ್ಲ ಅದೆಲ್ಲಾ ಭಾರತಾಂಬೆಯ ಮಕ್ಕಳಿಗೆ ಬಿಟ್ಟ ವಿಚಾರ.ಆದರೆ ಇದಂತೂ ಕಟು ಸತ್ಯ.ನಿಮ್ಮೆಗೆಲ್ಲಾ ಗೊತ್ತಿರುವ ಹಾಗೆ ಇದೀಗ ಇಡೀಯ ನಮ್ಮ ದೇಶ,ಈಗ ತಾನೆ ಆಟ ಮುಗಿಸಿದ ರಂಗಸ್ಥಳದಂತಾಗಿದೆ.ಪ್ರಸ್ತುತ ಎಲ್ಲಡೆ ಪುನರ್ ಮನನದ ಕಾಲ,ಹೀಗಾಯಿತು,ಹಾಗಗಬಾರದಿತ್ತು,ಹೀಗಾಗ ಬೇಕಿತ್ತು, ಎಂದು ಎಲ್ಲರೂ,ಎಲ್ಲೆಲ್ಲೂ,ಮಾತನಾಡಿಕೊಳ್ಳುತ್ತಿರುವುದು ಸಾಮನ್ಯ.ಕಳೆದ ಹಲವು ತಿಂಗಳಿನಿಂದ ರಾಜ್ಯ,ರಾಷ್ಟ್ರಮಟ್ಟದಲ್ಲಿ ಹಗರಣ,ಭ್ರಷ್ಟಚಾರದ್ದೆ ಕಾರ್‌ಬಾರ್,ಭೂಹಗರಣ,ಸ್ಪೆಕ್ಟ್ರಮ್,ಆದರ್ಶ ಹಗರಣ ಹೀಗೆ ಹಲಾವರು.ಆದರೆ ಈ ನಡುವೆ ಬಡವವಾದ್ದು ದೇಶ,ಹೋದದ್ದು ಜನರ ನಂಬಿಕೆ.

ಸರಿದ ಹಲವು ದಿನಗಳು ಭಾರತಕ್ಕೆ ಶನಿಕಾಟವಿದ್ದ ದಿನಗಳು,ಆ ದಿನಗಳೆಲ್ಲಾ ಸತ್‌ಪ್ರಜೆಗಳಾದ ನಾವು ’ಸತ್ತ’ಪ್ರಜೆಗಳಾಗಿ ಹಲವು ಕೆಟ್ಟ ವಿಚಾರಗಳಿಗೆ ಮೂಕ ಸಾಕ್ಷಿಗಳಾಗಿದ್ದೇವೆ.ಆಗಲೇ ಬೇಕು ಯಾಕೆಂದರೆ ಇದು ನಾವು ಮಾಡಿದ ಕರ್ಮದ ಫಲವಲ್ಲವೆ..ಇಷ್ಟಾದರು ಇನ್ನು ಏನೂ ಆಗದಂತೆ ಸುಮ್ಮನಿದೇವೆಲ್ಲವೇ.  ಹಾಗಂತ ಇದು ನಮ್ಮ ಕೈಲಾಗದತನವಲ್ಲ,ಇದು ನಮ್ಮ ಅಸಾಹಯಕತೆ.ಯಾರನ್ನು ನಂಬಬೇಕೆನ್ನುವ ಗೊಂದಲ,ಯಾರು ವಿಶ್ವಾಸರ್ಹರು ಎನ್ನುವ ಆತಂಕ,ಯಾರೊಟ್ಟಿಗೆ ಹೆಜ್ಜೆ ಹಾಕಿದರೆ ನಾವು ಗುರಿತಲುಪಬಹುದು ಎಂಬ ಭಯ,ಈ ಗೊಂದಲವೇ ನಮ್ಮ ದೇಶದ ಈಗಿನ ದೊಡ್ಡ ದುರಂತ.ಇದೆಕ್ಕೆಲ್ಲಾ ಕಾರಣ ಆದರ್ಶ ವ್ಯಕ್ತಿಗಳ ,ಉತ್ತಮ ನಾಯಕರ ಕೊರತೆ.ಎಲ್ಲಾ ಕ್ಷೇತ್ರಗಳಲ್ಲಿ ಆದರ್ಶವೆನ್ನಬಹುದಾದ ಬೆರಳಣಿಕೆಯಷ್ಟೆ ವ್ಯಕ್ತಿಗಳಿರುವುದು ನಮ್ಮ ದೇಶದ ಈ ಎಲ್ಲಾ ಹಿಮ್ಮುಕ ಚಲನೆಗಳಿಗೆ ಕಾರಣ.ಅದರಲ್ಲು ದೇಶದ ಅಭಿವೃದ್ದಿಯಲ್ಲಿ ಪ್ರಮುಖವೆನ್ನುವ ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತ ಅಂತಹ ವ್ಯಕ್ತಿಗಳೇ ಇಲ್ಲದೆ ಇರುವುದು,ಪರಿಸ್ಥಿತಿಯನ್ನು ಇನ್ನಷ್ಟು ಹಾಳು ಮಾಡಿದೆ.ಇದರಿಂದಾಗಿ ಆ ಕ್ಷೇತ್ರ ಅರಾಜಕತೆಯಿಂದ ತುಂಬಿ ಹೋಗಿದೆ,ಇದು ನಮ್ಮ ನಾಳಿನ ನಿರೀಕ್ಷೆಗಳಾದ ಯುವಕರಲ್ಲಿ ರಾಜಕೀಯದಲ್ಲಿ ಎಳ್ಳಷ್ಟು ನಂಬಿಕೆ ಇಲ್ಲದಂತೆ ಮಾಡಿದೆ,ಹೀಗಾಗಿರುವುದು ದೇಶಕ್ಕೆ ಮಾರಕವೆನ್ನುವುದರಲ್ಲಿ ಎರಡು ಮಾತಿಲ್ಲ.ಇವತ್ತು ನಮ್ಮ ಯುವಕರ ಮುಂದೆ ನಾನು ಹೀಗೆ ಆಗ ಬೇಕೆನ್ನುವ,ಅವರ ರೀತಿಯಲ್ಲಿ ಸಾಮಾಜದಲ್ಲಿ ಬಾಳಿಬದುಕ ಬೇಕೆಂದು ಗುರುತಿಸಲು ಅವರಿಗೆ ಸೂಕ್ತ ವ್ಯಕ್ತಿಗಳು ಇಲ್ಲವಾದ್ದು ವಿಪಾರ‍್ಯಸ,ಇದು ಅವರನ್ನು ಸಹಜವಾಗಿ ಮೌನಕ್ಕೆ ಶರಾಣಗುವಂತೆ ಮಾಡಿದೆ.ಇನ್ನು ಅವರು ಇದುವರೆಗೆ ವಿಶ್ವಾಸರ್ಹರು ಎಂದು ನಂಬಿದ್ದವರು ,ವಿಶ್ವಾಸರ್ಹರಲ್ಲಾ(ಉದಾ;ಯಡಿಯೂರಪ್ಪ) ಎಂದು ತಿಳಿಸುವ ಘಟನೆಗಳು ಪದೆ,ಪದೆ ನಡೆದಾಗ ಆದ ಆಘಾತ ಅವರನ್ನು ರೋಸಿ ಹೋಗಿಸಿವೆ.ಒಟ್ಟಿನಲ್ಲಿ ಪ್ರಸ್ತುತ ನಮ್ಮ ಭಾರತೀಯ ಸಮಾಜ ಉತ್ತಮ ನಾಯಕನನ್ನು,ಆದರ್ಶ ವ್ಯಕ್ತಿಗಳನ್ನು ಅನಿವಾರ್ಯವಾಗಿ ಆಗ್ರಹಿಸುತ್ತದೆ,ಹೊಸ ರಾಜಕೀಯ ಶಖೆಗಾಗಿ ಕಾಯುತ್ತಿದೆ.ಹಾಗಂತ ಭಾರತದ ಯುವಕರು ’ಆ’ ನಾಯಕನಿಗಾಗಿ ಅಥವಾ ವ್ಯಕ್ತಿಯ ಆಗಮನಕ್ಕಾಗಿ ಕಾಯಬೇಕಿಲ್ಲ,ಅದು ನೀವು ಆಗಬಹುದು..