ಅಲೆಮಾರಿ..

ನನ್ನ ಫೋಟೋ
kasaragod, kerala, India
If you want love, be lovable.Give more to other,expect less from other.

ಸೋಮವಾರ, ಫೆಬ್ರವರಿ 11

ನಿನ್ನೊಲುಮೆಯಿಂದಲೆ

ನಿನ್ನೊಲುಮೆಯಿಂದಲೆ

ಅರಿಯದಿರು , ಮರೆಯದಿರು
ಮತ್ತೊಮ್ಮೆ, ಮಗದೊಮ್ಮೆ
ಮಾಗಿದ ಒಲುಮೆಯ ನೆನಪುಗಳನ;
ಭಾವ, ಜೀವ ಸೆಲೆಯಾಗಿ
ಮೈದುಂಬಿ ಕಳೆದ ದಿನಗಳನ;
ಕ್ಷಮಿಸು , ಹಿಂತಿರುಗದಿರು
ಕ್ಷಮಿಸು, ಹಿಂತಿರುಗದಿರು
ಮತ್ತೊಮ್ಮೆ ಮೈದುಂಬಿ, ಸೋಕಿ
ಮಾಡದಿರು ಭಾವಸಖನಾಗಿ.
ಪರವಶನಾದೆ  ಆವತ್ತೆ$$$$
ಕಳೆದು ಹೋದೆ ಆವತ್ತೆ$$$$
ನಿನ್ನೊಲುಮೆಯಿಂದಲೆ.
                                                      ಅಲೆಮಾರಿ

ಗುರುವಾರ, ಡಿಸೆಂಬರ್ 27

ಕವಿತೆ

ªÀµÀð IÄvÀĪÉà ºÁUÉ, JµÀÄÖ PÀ¼ÉzÀÄ ºÉÆÃzÀgÀÄ CzÀÄ CZÉÆÑvÀÄÛªÀ £É£À¥ÀÄ, ¤ÃqÀĪÀ ¸ÀÄR ªÀiÁvÀæ ±Á±ÀévÀ. D IÄvÀÄ«£À°è ¥ÀæwAiÉÆAzÀÄ ºÀ¤UÀ¼ÀÄ ¨sÀÆ«ÄUÉ PÉÆqÀĪÀµÉÖà £ÉªÀÄä¢ ªÀÄ£ÀĵÀå ºÀÈzÀAiÀÄPÀÆÌ ¤ÃqÀÄvÉÛ..ªÀÄ£À¹ì£À  zÀÄR:, vÉÆ¼À¯Ál, J®èªÀ£ÀÄß ºÀ¤AiÉÆAzÀÄ ªÀÄgɬĸÀÄvÀÛzÉ..ºÁUÁV ªÀµÀð IÄvÀÄ ªÀÄÄVzÀÄ ºÉÆÃzÀgÀÄ, ºÀ¤AiÉÆAzÀgÀ £É£À¥ÀÄ ªÀiÁvÀæ ªÀÄ£À¹ì£À ªÉÃzÀ£ÉUÉ ¸ÀàA¢¹ »ÃUÉ PÀ«vÉAiÀiÁUÀÄvÀÛzÉ.

ಹೊಸಹಾಡು

ಸೋನೆ ಮಳೆ ಹರಿಸಿದೆ
ನೆನಪಿನ ಹನಿಯನ್ನ.
ಪ್ರಕೃತಿಯ ನೆಮ್ಮದಿಯ
ಆ, ಉಸಿರು...ತಂಪು
ಮರೆಸಿದೆ ನೋವನ್ನ.
ಸ್ಮೃತಿಗಳಲಿ ಓಡುತಿದೆ
ಮರೆಯದ, ಮರೆತ
ಭಾವಲೋಕದ ಚಿತ್ರಗಳು.
ಹೊಸ ಹಾಡೊಂದು ಕೇಳುಸುತಿದೆ
ಮಾಯಲೋಕದ ಮೂಲೆಯೆಲ್ಲೆಲ್ಲೋ$$$
ತಾಳ ಹಾಕುತಿದೆ ಮಳೆಹನಿಗಳು
ದೂರದ ಆ ಹಾಡಿಗೆ ಖುಷಿಯಿಂದ.
ಒದ್ದೆಯಾದ ಹಾದಿಯೊಂದು ತೆರೆದಿದೆ
ದೂರದಿ ತನ್ನ ಇರವನ್ನ
ಮಾಯಲೋಕದ ಆ ಹಾಡ ಕೇಳಿ
ಮುನ್ನೆಡೆಯಲು...ಮುನ್ನುಗ್ಗಲು..
                                                ಅಲೆಮಾರಿ 

ಬುಧವಾರ, ನವೆಂಬರ್ 7

ನನ್ನ ಭಾನ್ವಿ




 ತೀರದ ನೆನಪು

ಸದ್ದು ಗದ್ದಲದ ನಡುವೆಯೇ
ನೆನಪಾಗುತಿಹಳು ನನ್ನ ಭಾನ್ವಿ
ಕಣ್ಣ ಕನಸಿಗೆ ಹಸಿಯಾಗುತಿಹಳು
ಪ್ರೇಮಮಯಿ  ಭಾನ್ವಿ
ನನ್ನ ಮನದೊಳಗಿನ ನಲ್ಮೆಯ
ಒಲವು ಮತ್ತೆ ಚಿಗೊರೊಡೆಯುತಿದೆ
ಮನ ಮಿಡಿಯುತಿದೆ, ಮಾಸದ
ಅವಳ ಸ್ನೇಹ ಸ್ಪರ್ಶಕೆ.

ಸಾಕೆನಿಸಿದೆ ಅವಳಿಲ್ಲದೆ ಕಳೆದ
ಖಾಲಿ, ಖಾಲಿ ದಿನಗಳು
ಸುಖವಿಲ್ಲದೆ, ಬೆಚ್ಚಗಿನ ಪ್ರೀತಿಯಿಲ್ಲದೆ
ನಗುವಿಲ್ಲದೆ, ಸಾಧನೆಯಿಲ್ಲದೆ
ಮುಗಿಯದ ಮಾಯಾಲೋಕವಿಲ್ಲದೆ

ಅವಳೆಂದು ನನ್ನ ಬಿಟ್ಟು ನಡೆಯಲಿಲ್ಲ
ಕಾಲವೇ ಕೈ ಹಿಡಿದು ನಡೆಸಿತು
ಅವಳನ್ನು  ಬಾಳ ನದಿಯ
ಇನ್ನೊಂದು ತೀರದಲಿ
ಹಚ್ಚ ಹಸಿರ ಹಾದಿಯಲಿ

ಅದೇಕೋ ಅವಳೂ ನಡೆದಳು
ಕಾಲದ ಅಳಲಿಗೆ, ಮೌನವಾಗಿ
ಇನ್ನೆಂದೂ ಬಾರದ , ಕಾಣದ
ತೀರದ ನೆನಪುಗಳಲಿ, ಭಾರದ ಹೆಜ್ಜೆಯಲಿ
ಸದ್ದು ಗದ್ದಲದ ನಡುವೆಯೇ
ನೆನಪಾಗುವಳು ನನ್ನ ಭಾನ್ವಿ.
                                            
                                                                                 ಅಲೆಮಾರಿ

ಭಾನುವಾರ, ಅಕ್ಟೋಬರ್ 7

ನೆನಪು-ಸಂತೆ

  


  ನೆನಪು-ಸಂತೆ

ಯಾಕೋ ಮತ್ತೆ ಮತ್ತೆ ಕಾಡುತಿದೆ
ನೆನಪುಗಳ ಸಂತೆಯಲಿ
ನನ್ನೊಲವಿನ ಹಸಿರು ದಿನಗಳು
ಆ ಸಂತೆಯೊಳಗೆಯೇ $$$
ಅವಳಿಲ್ಲದೆ, ನಲ್ಮೆಯ ಒಲವೊಂದೇ $$$
ಸಾಕ್ಷಿಯೆನುತ ಕಳೆದ ದಿನಗಳು
ಯಾಕೀಗ ಕಾಡುತ್ತೋ $$$, ಒಲವು
ಮತ್ತೆ... ಮತ್ತೆ... ಸಾಲುಗಳಾಗಿ
ಅದು, ಹುಣ್ಣಿಮೆ ಚಂದ್ರನಿಲ್ಲದ
ಈ ಕಡು ರಾತ್ರಿಯಲಿ, ಕವನವಾಗಿ
ಗಾಳಿಯೇ ಬೀಸದೆ ನೆನಪುಗಳಾಗಿ...
                                                                                        
                                                                    ಅಲೆಮಾರಿ

ಗುರುವಾರ, ಸೆಪ್ಟೆಂಬರ್ 6

ಭೂ 'ಸಂಕಟ'

ಮಳೆ ಈ ಸಲ ಭೂಮಿಯ ಮೇಲೆ ಕೋಪಿಸಿದಂತಿದೆ, ಸಂಪ್ರದಾಯದಂತೆ ಬರಬೇಕಾದ ಮಳೆ ಅದೆಷ್ಟೋ ಲೇಟಾಗಿ ಬಂದು ಹೋಗಿದೆ. ಆಧುನಿಕತೆಯ ಗುಂಗಿನಲಿ ಮುಳುಗಿದ್ದವರಿಗೆಲ್ಲಾ ಇದ್ರರಿಂದ ಒಮ್ಮೆ ಚಾಟಿ ಏಟಿ ಬೀಸಿದಂತಾಗಿದೆ. ಎಲ್ಲವೂ ನಮ್ಮಿಂದ ಸಾದ್ಯ ಅಂತ ಬೀಗುತ್ತಿದ್ದ ಉತ್ತಮ ನಾಗರಿಕರಿಗೆ, ಪ್ರಕೃತಿ ಶಕ್ತಿ ಏನು ಅನ್ನೋದನ್ನ ತೋರಿಸಿಕೊಟ್ಟದೆ. ಪ್ರಕೃತಿ ಅಸ್ತಿತ್ವದ ನಡುವೆ ಮಾನವರು ಏನೂ ಅಲ್ಲ ಅನ್ನೊದನ್ನ ಮತ್ತೆ ಸಾರಿ ಹೇಳಿದೆ. ಆದ್ರೂ ನಾಗರಿಕರ ಮತ್ತು ಇಳಿಯಲಿಲ್ಲ. ಆದ್ರೆ ಪಾಪ ಭೂ ತಾಯಿ ತನ್ನ ಮಕ್ಕಳಿಗೆ ಕ್ಷಮಿಸುತ್ತಾ ಬಂದಿದ್ದಾಳೆ, ಎಷ್ಟಾದರೂ ಅಮ್ಮ ಅಲ್ವೆ. ಅಂತಹ ತಾಯಿಗೆ ಮಕ್ಕಳ ಒಡುಗರೆಯಂತೂ ಸಹಿಲಾರದಷ್ಟು ಕಠಿಣ, ಆದ್ರೂ ತಾಯಿ ಮಕ್ಕಳಿಗೆ ಯಾವತ್ತೂ ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ, ಈ ಸಲ ಮಾತ್ರ ಆ ತಾಯಿಯೊಂದಿಗೆ ಮಳೆಯೇ ಕೋಪಿಸಿದಂತಿದೆ. ಭೂತಾಯಿ ಧರ್ಮ ಸಂಕಟದಲ್ಲಿದ್ದಾಳೆ, ಅವಳಿಗೆ ಅದು ನಿಶ್ಚಿತವಾಗಿ ಗೊತ್ತು ಈ ಸಲ ಮಳೆ ತನ್ನ ಮಕ್ಕಳ ತಪ್ಪಿಗೆ ಕೋಪಕೊಂಡಿದೆ, ತನ್ನ ಮಕ್ಕಳು ಮಾಡಿದ, ತಪ್ಪನ್ನು ಮತ್ತೆ, ಮತ್ತೆ ಮಾಡಿ ಮಳೆ ಮುನಿಸುವಂತೆ ಮಾಡಿದ್ದಾರೆ ಅನ್ನುವುದು. ಹಾಗಾದ್ರು ಭೂತಾಯಿ ತನ್ನ ಮಕ್ಕಳನ್ನು ಬಿಟ್ಟು ಕೊಡ್ಲಿಲ್ಲ, ಕಾಡಿ ಬೇಡಿ ಸ್ವಲ್ಪ ಲೇಟಾದ್ರು ಮಳೆ ಬರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಆದ್ರೂ ತನ್ನ ಮನಸ್ಸಲ್ಲಿ ದುಗುಡ ಇನ್ನೂ ಹಾಗೆ ಇದೆ, ಎಲ್ಲಿ ತನ್ನ ಮಕ್ಕಳು ಮತ್ತೆ ತಪ್ಪು ಮಾಡುತ್ತಾರೆ, ಮತ್ತೆ ಎಲ್ಲಿ ಮಳೆ ತನ್ನ ಮೇಲೆ ಕೋಪಿಸುತ್ತದೆ ಅನ್ನೋ ಭಯ ಅವಳಿಗೆ ಇತ್ತೀಚೆಗಿಂದ ಕಾಡುತ್ತಿದೆ. ಇಷ್ಟಾದರೂ ತಾಯಿಯ ಮಕ್ಕಳು ಮಾತ್ರ ಇದ್ಯಾವುದ್ರ ಪರಿವೇ ಇಲ್ಲದೇ ವಿಕೃತದಲ್ಲಿ ತೊಡಗಿದ್ದಾರೆ.  

ಭೂ 'ಸಂಕಟ'

ಹನಿಯೊಂದು ಕೊಟ್ಟಿತು ಮುತ್ತನು
ಮಳೆಯ ಹನಿಯೊಂದು ಕೊಟ್ಟಿತು
ಮುತ್ತೊಂದನು...ಬಿರಿದ ಭುವಿಯ
ತುಟಿಗೆ... ಒಡೆದ ತುಟಿಗೆ...

ಸುರಿದವು ಹನಿಗಳು ಮೆಲ್ಲಗೆ
ಸುರಿದವು ಮಳೆಯ ಹನಿಗಳು
ಒಡೆದ ಇಳೆಯ ಒಡಲಿಗೆ
ಸೋಕಿದೆ ಹನಿಗಳು ಚಿಮ್ಮುತ
ಸೋಕಿದೆ ಮಳೆಯ ಹನಿಗಳು
ಕೋಪವ ಮರೆತು, ಹಠವ ಬಿಟ್ಟು
ಮಳೆ ನೀಡಿದೆ ಇಳೆಗೆ ಮುತ್ತುಗಳನು

ಕೇಳಿದೆ ಭುವಿ ಕ್ಷಮೆಯನು
ಸಾರಿ, ಸಾರಿ ಕೇಳಿದೆ ಕ್ಷಮೆಯನು
ಮಳೆಯೊಡನೆ, ತನ್ನ ಮಕ್ಕಳ ತಪ್ಪಿಗೆ
ಮಕ್ಕಳೇನೋ $$$ ಇದಾರೆ ಅಹಂಕಾರದಲಿ
ಉತ್ತಮ ನಾಗರಿಕರ ಸೋಗಿನಲಿ, ಮತ್ತಿನಲಿ
ಮುನಿಸಿದ ಮಳೆ ಮಾತ್ರ ಸೋತಿದೆ
ಇಳೆಯ ಮುಗುದ ಒಲವಿಗೆ

ಮಳೆಯೂ $$$ ಕ್ಷಮಿಸಿದೆ ಇಳೆಗೆ
ಅವರೂ ನನ್ನದೇ ಮಕ್ಕಳೆಂದು...
ಆದರೂ ಭುವಿಯ ಮನದೊಳಗೆ
ತುಮುಲ...ಹೊಯ್ದಾಟ...
ಮತ್ತೆ ಮಕ್ಕಳು ತಪ್ಪು ಮಾಡದಿರಲಾರರು
ಮಳೆ ಮತ್ತೆ ಕೋಪಿಸದೆ ಇರದು ಅಂತ.
ಅಲೆಮಾರಿ

ಭಾನುವಾರ, ಆಗಸ್ಟ್ 5

ಕವನ...

''ಅದ್ಯಾಕೋ ಗೊತ್ತಿಲ್ಲ ಕಳೆದ ಎರಡು ಮೂರು ತಿಂಗಳಿಂದ, ಭೂಮಿಯಂತೆ ನಾನು ಬರಡಾಗಿದ್ದೆ. ನನ್ನಲ್ಲಿ ಕತೆಯೇ ಮೂಡಲಿಲಲ್ಲ, ಕವಿತೆ ಕಾಡಲೇ ಇಲ್ಲ, ಬರೆಯಬೇಕಿನಿಸಲೇ ಇಲ್ಲ, ಬರೀಯ ಜೀವನ ಲೆಕ್ಕಾಚಾರದಲ್ಲೇ ಮುಗಿಯಿತು ದಿನಗಳು.  ಬಳಲಿ ಬೆಂಡಾಗಿ ಹೊಸ ಮಳೆಗಾಗಿ ಕಾಯತ್ತಿರುವ ಭೂರಮೆಯಂತೆ ನಾನು ಬಿಡುಗಡೆಗೆ ಕಾಯುತ್ತಿದ್ದೆ. ಹೊಸತೇನಕ್ಕೋ ಹೊರಟಿದ್ದೆ, ಆದ್ರೆ ವಿರ್ಪಯಾಸ ಅಂದ್ರೆ ಅಲ್ಲಿ ಹೊಸತನ ಕಾಣಲೇ ಇಲ್ಲ , ಬದಲಾಗಿ ಕಂಡಿದ್ದು ಬಂಜರು ನಾಡು ಮತ್ತು ಅದೇ ಹಳೆ ರಾಗ. ಇನ್ನು ಬಂಜರು ನಾಡಲ್ಲಿ ಬೆಳೆ ತೆಗೆಯುವಷ್ಟು ದೊಡ್ಡವನಾಗಲಿಲ್ಲ ನಾನು ಅಂತ ಅನ್ಸ್ತು, ಹಾಗಾಗಿ ನನ್ನ ಕವಿತೆ, ಕಥೆ, ಸಿನಿಮಾ, ಪ್ರಕೃತಿ ಇದ್ಯಾವುದು ಇಲ್ಲದ, ನೀಡದ ಆ ಬರಡು ನಾಡಿಗೆ ನನ್ನ ದೊಡ್ಡ  'ಸಲಾಂ', ಈ ಕವಿತೆಗಳ ಮೂಡಿಸಿದಕ್ಕೆ.''

    ಸೋಲಿನ ಕವಿತೆ
ಮನಸ್ಸಿಗೇನು ಹುಚ್ಚು ಹಠ, ಅನ್ನಿಸ್ಸಿದ್ದನ್ನು
ಹೇಳಿ ಬಿಡುತ್ತದೆ ಹಾಗೆ ಸುಮ್ಮನೆ.
ಮೊದಲೇ ನಾನೊಬ್ಬ ಅಲೆಮಾರಿ
ವಿಲಾಸಿತನವೇ ನನ್ನ ಕನಸು
ಆ ಸ್ವಪ್ನವೇ ನನ್ನ ಸುಂದರ ಬದುಕು.

ಅದಕ್ಕೆ ನಾ ಯಾವತ್ತು
ಮನಸ್ಸಿನ ಸಂಚಾರಿ , ಅಲೆಮಾರಿ
ಮನದ ಮಾತೆ ನನ್ನ ಜೀವಾಳ
ಮನದ ಹಂಬಲವೇ ನನ್ನ ಸ್ಪೂರ್ತಿ.

ಅದಕ್ಕೆ ನಾ ಪ್ರತಿ ಸಲ
ಸೋಲುತ್ತೇನೆ ಕ್ಷಣ... ಕ್ಷಣ...
ಆದರೂ ಖುಷಿಯೇ, ಅದು ಹಾಗೇನೆ
ಆ ಸೋಲಿನ ಸಂತಸವೇ ನನಗೆ
ಹೀಗೆ ಚಿಗುರೊಡೆವ ಕವಿತೆ ಮೂಡಿಸುತ್ತೆ.



ಹೀಗೊ(ಒ)ಂದು ಪಯಣ

ಅದೇ ಹಾದಿ ಅದೇ ಪಯಣ
ಬೇಕಾದ್ದನ್ನು ಪಡೆಯದೇ  ಬೇಡದ್ದನ್ನು
ಎರವಾಗಿಸಿ ಮೌನವಾಗಿ ಸಾಗುವ
ನಿರ್ಮಲ, ನಿರಾತಂಕ ಪಯಣ...

ಮತ್ತೇ ಬೇಕೆನಿಸುತಿದೆ , ಕಾಡುತಿದೆ
ಆ ಚಂದ್ರನ ಅರಮನೆಯಲ್ಲಿ
ಮೂಡಿದ ಆ ಒಂಟಿ ಪ್ರೀತಿ...
ಆದರೆ  ಬಿಡುತ್ತಿಲ್ಲ  ವಾಸ್ತವ
ಆ ಒಂಟಿ ಪ್ರಣಯಕೆ.

ಹಾಗಿದ್ದರು ನಾನಿದ್ದೇನೆ ಹುಡುಕಾಟದಲಿ
ಅಳಿದು ಹೋದ ಆ ಅನಂತ ನಿಶೆಯಲಿ
ಬಾಳದಾರಿಯ  ಒಂಟಿ ಪಯಣದಲಿ.


ತೃಣ ಭಾವ
ಅಣತಿ ದೂರದಲ್ಲಿನ ತೃಣ ಮಾತ್ರ ಹುಲ್ಲು
ಮುಂಜಾನೆಯ ಎಳೆ ಬಿಸಿಲಿಗೆ ಹೊಳೆಯುತ್ತಿತ್ತು
ದಿನವಿಡೀ ಬಿರು ಬೇಗೆಗೆ ಬೆಂದ ಹುಲ್ಲು
 ನಿಶೆಯಲ್ಲಿನ ಮಂಜಿನ ಹನಿಯ
ಮೃದು ಸ್ಪರ್ಶಕೆ ಮೈದಳೆದಿತ್ತು.
ಮತ್ತೇ ಸೋಕುವ ಹಸಿ ಬಿಸಿಲಿಗೆ.
ಮೆಲ್ಲನೆ...ಮಂಜಿನ ಹನಿಯೊಂದಿಗೆ
ಹೊಳೆಯುತ್ತಿತ್ತು... ಹೊಸ ಆಸೆಯೊಂದಿಗೆ.
ಅರಿವಿಲ್ಲ ಹುಲ್ಲಿಗೆ ಇದುವೇ ತನ್ನ
ಬದುಕ ಕೊನೆಯ ದಿನವೆಂದು.
ಮೈದಳೆದಿದೆ ಹುಲ್ಲು ಮತ್ತೆ
ಬಿಸಿಲಿಗೆ ಮೈಯೊಡ್ಡಲು...ಮತ್ತೆ
ರಾತ್ರೆಯ ಮಂಜಿನ ಹನಿಯ
ಸ್ಪರ್ಶ ಸುಖ ಸವಿಯಲು.
ಅಲೆಮಾರಿ